ಕ್ರಿಮಿನಲ್ಲು ನನಕಣ್ಣು ಸಿವಿಲ್ಲು ಮಾಡಯ್ಯ

ಕ್ರಿಮಿನಲ್ಲು ನನಕಣ್ಣು ಸಿವಿಲ್ಲು ಮಾಡಯ್ಯ
ಶಿವಬಲ್ಲ ಸಿಹಿಬೆಲ್ಲ ಆಗಬೇಕು
ಕೆನೆಬೆಲ್ಲ ಕೊಬ್ಬರಿಯ ಎದೆಯನ್ನು ನೀಡಯ್ಯ
ರಾವಣನ ರಂಬಾಟ ನಿಲ್ಲಬೇಕು

ಕರಿಯ ಬೆಕ್ಕಿನ ಕಣ್ಣು ಗಿಡದ ಮಂಗನ ಕಣ್ಣು
ಬೇಲಿಮುಂಗಲಿ ಕಣ್ಣು ನಿಲ್ಲಬೇಕು.
ಓ ಅಕ್ಕ ಓ ತಾಯಿ ನನ್ನವ್ವ ನನದೇವಿ
ತಾಯಿಯೆಂಬುವ ಬೆಳಗು ತುಂಬಬೇಕು

ಕಣ್ಣೊಳಗ ಶಿವತುಂಬಿ ಮಳೆತುಂಬಿ ಹೊಳೆತುಂಬಿ
ಹರಹರಾ ಹರನೆಂಬ ಹಾಡುಬರಲಿ
ಕಣ್ಣು ಕವಳಿಯ ಹಣ್ಣು ರುಚಿಯ ನಿಂಬೆಯ ಹಣ್ಣು
ಶಾಂತಿಸಾಗರ ಸುರಿದು ತುಂಬಿ ಬರಲಿ

ಎದಿಯೊಳಗ ಶಿವಲಿಂಗ ನಿಜಲಿಂಗ ಚಿಲ್ಲಿಂಗ
ತಲಿಯೊಳಗ ಘನಲಿಂಗ ತೂಗಾಡಲಿ
ಓ ಅಯ್ಯ ಅಪ್ಪಯ್ಯ ಚನ್ನಯ್ಯ ಚಲುವಯ್ಯ
ಪಂಚಲಿಂಗೇಶ್ವರನೆ ಕುಣಿದಾಡಲಿ.


Previous post ಬಡ್ಜಟ್
Next post ಚಕ್ರವ್ಯೂಹ

ಸಣ್ಣ ಕತೆ

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

cheap jordans|wholesale air max|wholesale jordans|wholesale jewelry|wholesale jerseys